Sunday, November 10, 2013

Ee Bandhana : Adhe Bhoomi Adhi Baanu Kannada Lyrics

Ee Bandhana : Adhe Bhoomi Adhi Baanu Lyrics
Back to Blogging after a long break ..

Film : Ee Bandhana
Singer : Shreya Goshal , Sonu Nigam
Lyricist : Jayanth Kaikini
Music Director : Mano Murthy

ಅದೇ ಭೂಮಿ ಅದೇ ಬಾನು ,ಈ ನಯನ ನೂತನ
ಅದೇ ದಾರಿ ಅದೇ ತಿರುವು, ಈ ಪಯಣ ನೂತನ
ನನ್ನ ಮೋಡ ನನ್ನ ಹಾಡು , ನನ್ನ ಕನಸೇ ಓಮ್ಮೆ ನೋಡು
ನನ್ನ ಚೆಲುವಿನ ನಂದನ
ಓ ಏನು ಮಧುರ ಈ ಬಂಧನ
ಅದೇ ಭೂಮಿ ಅದೇ ಬಾನು ,ಈ ನಯನ ನೂತನ

ಉದಯ ಕಿರಣ ಸೆಳೆದಾಗ
ಹೂವ ಹನಿಯು ಹೊಳೆದಾಗ
ಋತುವಿನ ಬಂಧನ
ಹೃದಯ ಕಣ್ಣಲ್ಲಿ ಉಳಿವಾಗ
ಬೇರೆತು ಈ ಜೀವ ನಲಿವಾಗ
ಒಲವಿನ ಬಂಧನ

ಕನಸಿನ ನೂರು ಎಳೆಯಿಂದ
ನೇಯುವ ಗೂಡು ಸಂಭಂದ
ನಲುಮೆಯ ಬಂಧನ
ಯಾರೋ ಕರೆದಂತೆ ದೂರಿಂದ
ಗರಿಯ ತೆರೆದಂತ ಮರಿ ಚೆಂದ
ಗೆಲುವಿನ ಬಂಧನ

ಅದೇ ಭೂಮಿ ಅದೇ ಬಾನು ,ಈ ನಯನ ನೂತನ
ಅದೇ ದಾರಿ ಅದೇ ತಿರುವು, ಈ ಪಯಣ ನೂತನ
ನನ್ನ ಮೋಡ ನನ್ನ ಹಾಡು , ನನ್ನ ಕನಸೇ ಓಮ್ಮೆ ನೋಡು
ನನ್ನ ಚೆಲುವಿನ ನಂದನ
ಓ ಏನು ಮಧುರ ಈ ಬಂಧನ
ಅದೇ ಭೂಮಿ ಅದೇ ಬಾನು ,ಈ ನಯನ ನೂತನ

********************************************************
English lyrics here
http://mykannadalyrics.blogspot.com/2013/11/ee-bandhana-adhe-bhoomi-adhi-baanu.html
********************************************************
Youtube link here

Friday, October 11, 2013

Gaalipaata : Minchaagi Neenu Baralu Lyrics

Film : Gaalipaata
Singer : Sonu Nigam
Music Director : V Harikrishna
Lyricist : Jayanth Kaikini
Director : Yograj Bhatt

ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಾಗೆ ನೀ ಜೋತೆಗಿರಲು ಕೂತಲ್ಲಿಯೆ ಛಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ
ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಾಗೆ ನೀ ಜೋತೆಗಿರಲು ಕೂತಲ್ಲಿಯೆ ಛಳಿಗಾಲ

ನಾ ನಿನ್ನ ಕನಸಿಗೆ ಚಂದಾದರನು
ಚಂದಾ ಬಾಕಿ ನೀಡಲು ಬಂದೆ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೆ ಮಾತೆ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು
ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಾಗೆ ನೀ ಜೋತೆಗಿರಲು ಕೂತಲ್ಲಿಯೆ ಛಳಿಗಾಲ

ನಿನ್ನ ಮನದ ಕವಿತೆ ಸಾಲ ಪಡೆವನಾನು ಸಾಲಗಾರ
ಕಣ್ಣ ತೆರೆದು ದೋಚಿಕೊಂಡ ನೆನುಪುಗಳಿಗೆ ಪಾಲುದಾರ
ನನ್ನದೀ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು
ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಾಗೆ ನೀ ಜೋತೆಗಿರಲು ಕೂತಲ್ಲಿಯೆ ಛಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ


**************************************************

**************************************************
Youtube link here


Tuesday, October 1, 2013

Milana : Ninnindale Song Kannada Lyrics

Film : Milana
Singer : Sonu Nigam
Lyricist : Jayanth Kaikini
Music Director : Mano Murthy
Actors : Puneeth Rajkumar,Pooja Gandhi

ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಹಾಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸಿಂದು ಕುಣಿದಾಡಿದೆ

ಇರುಳಲ್ಲಿ ಜ್ವರದಂತೆ ಕಾಡಿ ಈಗಾ ಹಾಯಾಗಿ ನಿಂತಿರುವೆ ಸರಿ ಏನು
ಬೇಕಂತಲೆ ಮಾಡಿ ಏನೋ ಮೋಡಿ ಇನ್ನೆಲ್ಲೊ ನೊಡುವ ಪರಿ ಏನು
ಈ ಮಾಯೆಗೆ ಈ ಮರುಳಿಗೆ ನಿನ್ನಿಂದ ಕಳೆ ಬಂದಿದೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ

ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ ಸೊಂಪಾದ ಚೆಲುವಿನ ಗುಣಗಾನ
ಕೇಂದಿಗೆ ಗರಿಯಂಥ್ ನಿನ್ನ ನೋಟ ನನಗೇನೊ ಅಂದಂತೆ ಅನುಮಾನ
ಕಣ್ಣಿಂದಲ್ಲೆ ಸದ್ದಿಲ್ಲದೆ ಮುದ್ದಾದ ಕರೆ ಬಂದಿದೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ

ಈ ಎದೆಯಲ್ಲಿ ಸಿಹಿಯದ ಕೋಲಹಾಲ
ನನ್ನೆದುರಲ್ಲೆ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ
ನಿನ್ನಿಂದಲೆ ನಿನ್ನಿಂದಲೆ ಕನಸೊಂದು ಶುರುವಾಗಿದೆ
ನಿನ್ನಿಂದಲೆ ನಿನ್ನಿಂದಲೆ ಮನಸಿಂದು ಕುಣಿದಾಡಿದೆ

********************************************************
English Lyrics here
http://mykannadalyrics.blogspot.com/2013/10/milana-ninnindale-song-lyrics.html

********************************************************
Youtube link here

Saturday, August 3, 2013

Nyaya Neethi Moorthivetha Satya Daivave lyrics : Kannada Devotional Song

Nyaya Neethi Moorthivetha Satya Daivave lyrics

Kannada Devotional Song
Singer : B K Sumithra

ವಂದೇ ಶಂಭು ಉಮಾಪತಿಮ್ ಸುರಗುರುಮ್
ವಂದೇ ಜಗತ್ ಕಾರಣಂ
ವಂದೇ ಪನ್ನಗ ಭೂಷಣಮ್ ಮೃಗಧರಮ್
ವಂದೇ ಪಶುನಾಮ್ ಪತಿಮ್
ವಂದೇ ಸೂರ್ಯ ಶಶಂಕ್ ವನ್ನಿ ನಯನಮ್
ವಂದೇ ಮುಕುಂದಪ್ರಿಯಮ್
ವಂದೇ ಭಕ್ತ ಜನಾಶ್ರಯನ್ಚ ವರದಮ್
ವಂದೇ ಶಿವಮ್ ಶಂಕರಮ್

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಧರ್ಮಪಾಲಾ ದಯಶೀಲ ಮಂಜುನಾಥನೆ
ನಿನ್ನ ಚರಣ ಸೇವೆ ನಮ್ಮ ಗುರಿಯ ಸಾಧನೆ
ಕಾಳರಾತ್ರಿ ಕಾಳರಾಹು ಕುಮಾರಸ್ವಾಮಿಗೆ
ನೇಮದಿಂದ ನಮಿಸುವೆವು ಹೆಜ್ಜೆಹೆಜ್ಜೆಗೆ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಅನ್ನಪ್ಪ ಗುರುವೆ ನಿನ್ನಗೆ ಶರಣು ಏನುವೆ
ನಿನ್ನ ರಕ್ಷೆ ಇರಲು ನಾನು ಎಲ್ಲ ಗೆಲುವೆ
ನ್ಯಾಯ ಮಾರ್ಗದಲ್ಲಿ ನೆಡೆದು ಧನ್ಯನಾಗುವೆ
ಧರ್ಮ ನನ್ನ ಕಾಯಲೆಂದು ಸದ ಬೇಡುವೆ

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

ಧರ್ಮವನು ರಕ್ಷಿಸುವ ಶಕ್ತಿ ನೀಡು
ನಿನ್ನ ನಂಬಿ ಬಾಳುವ ಭಕ್ತಿ ನೀಡು
ಸತ್ಯವೆ ಗೆಲುವ ನ್ಯಾಯ ನೀಡು
ನಮ್ಮ ಮನದ ಗುಡಿಯಲ್ಲಿ ವಾಸ ಮಾಡು

ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ
ಭೂಮಿಗಿಳಿದ ಕೈಲಾಸ ನಿನ್ನ ಸನ್ನಿಧಿ
ನೇತ್ರಾವತಿ ನದಿ ಇದುವೆ ಆ ಸುರನದಿ
ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ಧೈವವೇ
ಮಹಾಮಹಿಮ ಮಂಜುನಾಥ ನಮೋ ಎನುವೆ

*************************************************
English Lyrics here
http://mykannadalyrics.blogspot.com/2013/08/nyaya-neeti-moorthivetha-satya-daivave.html

*************************************************
Youtube Link here

Friday, May 10, 2013

Ranadheera : Yaare Neenu sundhara cheluve lyrcis



Film : RaanaDheera
Actors : RaviChandran, Khushboo,Jaggesh
Singers : S Janaki, SPB


ಯಾರೇ ನೀನು  ಸುಂದರ ಚೆಲುವೆ ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ
ಬಾ ಭೂಮಿಯೆ ನಿನ್ನೊಡಲ್ಲಲಿ ನಾನಾಡುವೆನು
ಬಾ ಪ್ರೇಮಿಯೆ  ನಿನ್ನೆದೆಯಲ್ಲಿ ನಾ ಓಲಾಡುವೆನು
ಈ ಅಂದ ಚೆಂದವೆಲ್ಲ ಯಾರಿಗಾಗಿ ಹೇಳೆಯಾ
ಯಾರೇ ನೀನು  ಸುಂದರ ಚೆಲುವೆ ಒಬ್ಬಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ

ಸೂರ್ಯನ ಚಿನ್ನದ ಕಿರಣ ನಿನ್ನ ಮೈಯ ಬಣ್ಣ
ಮಿಂಚಿದೆ ಮಿಂಚುತ ಮಿನುಗಿದೆ
ಸುಂದರ ಸರೋವರಗಳು ನಿನ್ನ ಎರಡು ಕಣ್ಣು
ಕಣ್ಣಲಿ ವಿರಹವೇ ತುಂಬಿದೆ
ಮಳೆಗಾಲ ಬಂದಾಗ ಮೈಮರೆವಾ ಓ ಸಿಂಗಾರಿ
ಚಳಿಗಾಲ ಬಂದಾಗ ಮುಸುಕೆಳೆವಾ ಓ ಚಿನ್ನಾರಿ
ಹೀಗೇಕೆ ಕಾದಿರುವೆ ಮನಸಿನ ಚಿಂತೆ ಹೇಳೆಯಾ

ಯಾರೇ ನೀನು  ಸುಂದರ ಚೆಲುವೆ ಒಬ್ಬಾಳೆ ನಿಂತಿರುವೆ
ಹಸಿರು ಸೀರೆ ಮಲ್ಲಿಗೆ ಮುಡಿದು ಯಾರಿಗೆ ಕಾದಿರುವೆ

ವಾರೆವಾ ಈ ಕಾಫಿ ತುಂಬ ಬೊಂಬಾಟಾಗಿದೆ
ಕಾಫಿ ಮಾಡೋ ಹುಡುಗಿ ಕೂಡ ಬೊಂಬಾಟಾಗಿದೆ
ಓ ಮನ್ಮಥ ಪುತ್ರರೆ ನನ್ನ ಹಾಡು ಕೇಳಿದಿರಾ
ಹೌದಮ್ಮ ರತಿ ಪುತ್ರಿ ನಿನ್ನ ಹಾಡು ಕೇಳಿದಿವಿ
ಮನಸಾರೆ ಮೆಚ್ಚಿದಿವಿ ಎಂಜಾಯ ಮಾಡಿದಿವಿ
ಎಲ್ಲಾನೂ ನೋಡದಿವಿ

ಇಲ್ಲಮ್ಮ ತಾಯಿ ಮುಚ್ಚೋ ಬಾಯಿ
ಬೊಗಳೆ ದಾಸಯ್ಯ
ನಾನಿನ್ನ ತಾಯಿ ಅಲ್ಲ ಪುಟ್ಟ ತಂಗಿ ಅಣ್ಣಯ್ಯ

ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳೋಲ್ಲಾ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ

ಎ ಸಂಜು
ಏನೇ ಹೇಳು ಸಂಜು ಅವಳ ಹಾಡು ಕೇಳಿ
ಮನಸಿಗೆ ತಿಳಿಯದ ಮುಜುಗರಾ
ಕಾಡಾಲ್ಲಿದ್ದರು ಕೂಡ ಹಾಡಿ ನಲಿಯುತಾಳೆ
ಅವಳದು ಎಂತದು ಸಡಗರಾ
ಇಂಪಾಗಿ ಹಾಡ್ತಿಯಾಂತ ಹೇಳೋಕೆ ನಾ ಹೋದೆ
ಯಾಕೇಂತ ಗೋತಿಲ್ಲಾ ಮಾತಿಲ್ಲದಂತೆ ನಾನಾದೆ
ಹೀಗೆಕೆ ನಾನಾದೆ ನೀನ್ನಾಣೆ ನನಗೇನೋ ಇದು ಹೊಸದು


ಈ ಪ್ರೀತಿಯು ಬರುವ ಮುಂಚೆ ಯಾರಿಗೂ ಹೇಳೋಲ್ಲಾ
ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ

****************************************************
English Lyrics here
http://mykannadalyrics.blogspot.com/2013/05/ranadheera-yaare-neenu-sundhara-cheluve.html
****************************************************
Youtube link here


Sunday, March 3, 2013

Geetha : Naana Jeeva Neenu Kannada lyrics

Film : Geetha
Actors : ShankarNag,Savakar Janaki,Akshata Rao
Singer :S P Balasubramaniam,S Janaki


ನನ್ನ ಜೀವ ನೀನು
ನನ್ನ ಬಾಳ ಜೋತಿ ನೀನು
ನನ್ನ ಜೀವ ನೀನು
ನನ್ನ ಬಾಳ ಜೋತಿ ನೀನು
ನಿನ್ನ ಕಣ್ಣ ಕಂಬನಿ ನನ್ನಾಣೆ ನೋಡಲಾರೆನು
ನನ್ನ ಜೀವ ನೀನು
ನನ್ನ ಬಾಳ ಜೋತಿ ನೀನು

ಬಾಡಿ ಹೋದ ಹೂವಿನಂತೆ ಏಕೆ ಹೀಗೆ ಕಾಣುವೆ
ಬಾಡಿ ಹೋದ ಹೂವಿನಂತೆ ಏಕೆ ಹೀಗೆ ಕಾಣುವೆ
ನೋಡುವಾ ಆಸೆಗೆ ನೋಡುವಾ ಆಸೆಗೆ ನಿನ್ನ ಕಂಗಳಾಗುವೆ
ಹರುಷ ತುಂಬಿ ನಗಿಸುವೆ
ನನ್ನ ಜೀವ ನೀನು
ನನ್ನ ಬಾಳ ಜೋತಿ ನೀನು
ನಿನ್ನ ಕಣ್ಣ ಕಂಬನಿ ನನ್ನಾಣೆ ನೋಡಲಾರೆನು
ನನ್ನ ಜೀವ ನೀನು
ನನ್ನ ಬಾಳ ಜೋತಿ ನೀನು

ಯಾರ ಶಾಪ ಬಂದಿತೊ
ಯಾರ ಶಾಪ ಬಂದಿತೊ
ಯಾರ ಕೋಪ ಸೋಕಿತೊ
ನಿನ್ನನೂ ನಾನ್ನಿಂದು ನೋಡೋಡೊ ಆಸೆ ಮಾಡೊದೇನು
ಚಿಂತೆ ಏಕೆ ನಾನಿಲ್ಲವೆ
ನನ್ನ ಜೀವ ನೀನು
ನನ್ನ ಬಾಳ ಜೋತಿ ನೀನು
ನಿನ್ನ ಕಣ್ಣ ಕಂಬನಿ ನನ್ನಾಣೆ ನೋಡಲಾರೆನು
ನನ್ನ ಜೀವ ನೀನು
ನನ್ನ ಬಾಳ ಜೋತಿ ನೀನು

******************************************************
Enlgish lyrics here
http://mykannadalyrics.blogspot.com/2013/03/after-long-break-back-to-blog-film.html

******************************************************
Youtube link here


Thursday, February 7, 2013

Akasmika : Baaluvantha Hoove Kannada lyrics


Film : Akasmika
Singer : Rajkumar
Actors: Raj kumar,Madhavi,Geetha

ಬಾಳುವಂತ ಹೂವೆ ಬಾಡುವಾಸೆ ಏಕೆ
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೊಣಿ ಮೇಲೆ ಯಾನ ಯೋಗ್ಯವೇ
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ

ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು
ವ್ಯರ್ಥ ವ್ಯಸನದಿಂದ ಸಿಹಿಯು ಕೂಡ ಬೇವು
ಬಾಳು ಒಂದು ಸಂತೆ,ಸಂತೆ ತುಂಬ ಚಿಂತೆ
ಮಧ್ಯ ಮನಗಳಿಂದ ಚಿಂತೆ ಬೆಳೆವುದಂತೆ

ಅಂಕೆ ಇರದ ಮನಸನು ಡಂಡಿಸುವುದು ನ್ಯಾಯ
ಮೂಕ ಮುಗ್ದ ದೇಹವ ಹಿಂಸಿಸುವುದು ಹೇಯಾ
ಸಣ್ಣ ಬಿರುಕು ಸಾಲದೆ ತುಂಬು ದೋಣಿ ತಳ ಸೆರಲು
ಸಣ್ಣ ಅಳುಕು ಸಾಲದೆ ತುಂಬು ಬದುಕು ಬರಡಾಗಳು

ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ

ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ ಆದ್ಯತೆ
ನಾವೆ ಮೂಢರಾದರೆ  ಜ್ಞಾನಕೆಲ್ಲಿ ಪೂಜ್ಯತೆ

ಇಲ್ಲಿ ಈಸಬೇಕು ಇದ್ದು ಜಯಿಸಬೇಕು
ನಾಗರಿಕರಾದಮೇಲೆ ಸುಗುಣರಾಗಬೇಕು
ನಿನ್ನ ಹಳದಿ ಕಣ್ಣಲಿ ಜನರನೇಕೆ ನೀ ನೋಡುವೆ
ಮನದ ಡೊಂಕು ಕಾಣದೆ ಜಗವನೇಕೆ ನೀ ದೂರುವೆ

ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಕವಲು ದಾರಿಯಲ್ಲಿ ಬಾಳು ಸಾಧ್ಯವೆ
ಅವಳಿ ದೊಣಿ ಮೇಲೆ ಯಾನ ಯೋಗ್ಯವೇ
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ


****************************************************
English lyrics here
http://mykannadalyrics.blogspot.com/2013/02/akasmika-baaluvantha-hoove-lyrics.html

*****************************************************
Youtube link here
 

Wednesday, January 30, 2013

Kannada folk song : Moodal kunigal kere kannada lyrics

Singer : B R Chaya


ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ
ಮೂಡಿ ಬರ್ತಾನೆ ಚಂದಿರಾಮ
ತಾನಂದನೋ ಮೂಡಿ ಬರ್ತಾನೆ ಚಂದಿರಾಮ
ಆ ತಂತ್ರಿಸಿ ನೋಡೋರ್ಗೆ ಎಂಥಾ ಕುಣಿಗಲ್ ಕೆರೆ
ಸಂತೆ ಹಾದಿಲಿ ಕಲ್ಲು ಕಟ್ಟೆ
ತಾನಂದನೋ ಸಂತೆ ಹಾದಿಲಿ ಕಲ್ಲು ಕಟ್ಟೆ

ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲ್ ಕೆರೆ
ಭಾವ ತಂದಾವನೆ ಬಣ್ಣದ ಸೀರೆ
ತಾನಂದನೋ ಭಾವ ತಂದಾವನೆ ಬಣ್ಣದ ಸೀರೆ
ನಿಂಬೆಯ ಹಣ್ಣೀನಂತೆ ತುಂಬಿ ಕುಣಿಗಲ್ ಕೆರೆ
ಅಂದಾ ನೋಡಲು ಶಿವ ಬಂದ್ರು
ತಾನಂದನೋ ಅಂದಾ ನೋಡಲು ಶಿವ ಬಂಡ್ರು

ಅಂದಾವ ನೋಡಲು ಶಿವ ಬಂದ್ರು ಶಿವಯೋಗಿ
ಕಬ್ಬಕ್ಕಿ ಬಾಯ ಬೀಡುತಾವೆ
ತಾನಂದನೋ ಕಬ್ಬಕ್ಕಿ ಬಾಯ ಬೀಡುತಾವೆ
ಕಬ್ಬಕ್ಕಿನೆ ಬಾಯಿ ಬೀಡುತಾವೆ ನಿಬಿಡದ
ಗಬ್ಬದಾ ಹೊಂಬಾಳೆ ನಡುಗ್ಯಾವೆ
ತಾನಂದನೋ ಗಬ್ಬದಾ ಹೊಂಬಾಳೆ ನಡುಗ್ಯಾವೆ

ಹಾಕಾಕ್ಕೊಂದ್ ಆರಗೋಲು ನೂಕಾಕ್ಕೊಂದ್ ಊರಗೋಲು
ಬೊಬ್ಬೆ ಹೊಡೆದಾವೆ ಬಾಳೆಮೀನು
ತಾನಂದನೋ ಬೊಬ್ಬೆ ಹೊಡೆದಾವೆ ಬಾಳೆಮೀನು
ಬೊಬ್ಬೆಯ ಹೊಡೆದಾವೆ ಬಾಳೆಮೀನು ಕೆರೆಯಾಗ
ಗುಬ್ಬಿ ಸಾರಂಗ ನಗುತಾವೆ
ತಾನಂದನೋ ಗುಬ್ಬಿ ಸಾರಂಗ ನಗುತಾವೆ

*************************************************
English lyrics here
http://mykannadalyrics.blogspot.com/2013/01/kannada-folk-song-moodal-kunigal-kere.html


************************************************
Youtube link here

Friday, January 4, 2013

Upasane : Aachaarvillada Naalige Kannada lyrics

Dasara Padagalu in Kannada Films Week : Song 6

Rachane : Purandhara Dasaru
Film : Upasane
Singer : S Janaki



ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ
ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತ ನಾಲಿಗೆ
ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತ ನಾಲಿಗೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ


ಚಾಡಿಹೇಳಲು ಬೇಡ ನಾಲಿಗೆ ನಿನ್ನ ಬೇಡಿ ಕೊಂಬೆನು ನಾಲಿಗೆ
ಚಾಡಿಹೇಳಲು ಬೇಡ ನಾಲಿಗೆ ನಿನ್ನ ಬೇಡಿ ಕೊಂಬೆನು ನಾಲಿಗೆ
ರೂಢಿಗೊಡಯ ಶ್ರೀರಾಮನ ನಾಮವ ಪಾಡುತಲಿರು ಕಂಡ್ಯ ನಾಲಿಗೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ

ಹರಿಯ ಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠ್ಠಲರಾಯನ
ವರದ ಪುರಂದರ ವಿಠ್ಠಲರಾಯನ  ಚರಣಕಮಲವ ನೆನೆ ನಾಲಿಗೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ
ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತ ನಾಲಿಗೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು ನಾಲಿಗೆ

***************************************************
English Lyrics here

***************************************************
Youtube link here


Malaya Marutha : Ellaru Maduvudu Kannada lyrics

Dasara Padagalu in Kannada Films Week : Song 5

Rachance : Kanaka Dasaru
Singer : Yesudhas
Actors : Vishnuvardhan,Madhavi
Film : Malaya Marutha


ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು ಕೂಲಿಗಳ ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು ಕೂಲಿಗಳ ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ನಾಲ್ಕು ವೇದ ಪುರಾಣಶಾಸ್ತ್ರ ಪಂಚಾಗ ಹೇಳಿಕೊಂಡು ಕಾಲ ಕಳೆಯುವುದೆಲ್ಲ
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನಾ ವೇಷ ಕೊಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನಾ ವೇಷ ಕೊಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಉನ್ನತ ಕಾಗಿನೆಲೆ ಆದಿಕೇಶವನ ಅನುದಿನ ನೆನೆವುದು ಭಕ್ತಿಗಾಗಿ ಪರ ಮುಕ್ತಿಗಾಗಿ
ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
*******************************************
English lyrics here
http://mykannadalyrics.blogspot.in/2013/01/malaya-marutha-ellaru-maduvudu-lyrics.html

*******************************************
Youtube link here